ಕಾರ್ಕಳ ಅತ್ತೂರು ಪರ್ಪಲೆ ಕಲ್ಕುಡ ಕ್ಷೇತ್ರಕ್ಕೆ ಪವರ್ ಟಿ ವಿ ಯ ಮುಖ್ಯಸ್ಥರಾದ ರಾಕೇಶ್ ಶೆಟ್ಟಿ ಭೇಟಿ

0
6

ಕಾರ್ಕಳ : ಅತ್ತೂರು ಪರ್ಪಲೆ ಕಲ್ಕುಡ ಕ್ಷೇತ್ರಕ್ಕೆ ಪವರ್ ಟಿ ವಿ ಯ ಮುಖ್ಯಸ್ಥರಾದ ರಾಕೇಶ್ ಶೆಟ್ಟಿ ಭೇಟಿ ನೀಡಿದರು. ಕ್ಷೇತ್ರದ ಅಭಿವೃದ್ಧಿಗೆ ಸದಾ ತನ್ನ ಸಹಕಾರ ಇರುವುದಾಗಿ ತಿಳಿಸಿದ ರಾಕೇಶ್ ಶೆಟ್ಟಿಯವರು ಕಾರ್ಕಳದಲ್ಲಿ ಇಂತಹದೊಂದು ಪ್ರಕ್ರತಿ ನಿರ್ಮಿತ ಸುಂದರ ಪ್ರದೇಶ ಇರುವುದು ನಮಗೆಲ್ಲ ಹೆಮ್ಮೆ ತರುವ ವಿಚಾರ ಎಂದರು.

ರಾಕೇಶ್ ಶೆಟ್ಟಿಯವರಿಗೆ ಅತ್ತೂರು ಪರ್ಪಲೆ ಕೃಷ್ಣಗಿರಿ ಟ್ರಸ್ಟ್ ನ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಸುಭಾಸ್ಚಂದ್ರ ಹೆಗ್ಡೆ, ಕಾರ್ಯದರ್ಶಿ ಸತ್ಯೇಂದ್ರ ಭಟ್, ಟ್ರಸ್ಟಿಗಳಾದ ಬೋಳ ಪ್ರಶಾಂತ್ ಕಾಮತ್ ಹಾಗೂ ಜೀರ್ಣೋದ್ದಾರ ಸಮಿತಿ ಸದಸ್ಯರು, ಹಾಗೂ ವರದಿಗಾರರಾದ ಸಂಪತ್ ನಾಯಕ್, ಸಿದ್ದಿ ಉದಯ ಶೆಟ್ಟಿ, ಅರುಣ್ ಸೇನ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here