ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ಶ್ರೀದೇವರ ಸನ್ನಿಧಿಯಲ್ಲಿ ಸೋಮವಾರದಂದು ಶ್ರೀಕಾಶೀ ಮಠಾಧೀಶರಾದ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ 100 ನೇ ಜನ್ಮನಕ್ಷತ್ರದ ದಿನದ ಸ್ವಾತಿ ನಕ್ಷತ್ರ ದಂದು ಸದ್ಗುರು ಪರಮಪೂಜ್ಯ ಶ್ರೀಪಾದರ ಜನ್ಮಶತಾಭ್ಧಿ ಆರಾಧನಾ ಮೊಹೋತ್ಸವ ವೈಭವದಿಂದ ನಡೆಯಿತು.
ಶ್ರೀದೇವರಿಗೆ ವಿಶೇಷ ಅಲಂಕಾರ , ವಿಶೇಷ ಭಜನಾ ಕಾರ್ಯಕ್ರಮ , ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ ಭಾವ ಚಿತ್ರ ಮೆರವಣಿಗೆ ಜರಗಿತು , ಶ್ರೀ ಸುಧೀಂದ್ರ ವಾಣಿ ಪಠಣೆ , ಗುರು ಸ್ಮರಣಿ , ಕಾಣಿಕೆ ಸಮರ್ಪಣೆ ಜರಗಿತು , ಪಲ್ಲಕಿ ಉತ್ಸವ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್ , ದಯಾಘಾನ್ ಭಟ್ , ವಿದ್ವಾನ್ ಹರಿಪ್ರಸಾದ್ ಶರ್ಮ , ದೇವಳದ ಮುಕ್ತೇಸರ ಪಿ ವಿ ಶೆಣೈ , ದೇವಳದ ಭಜನಾ ಮಂಡಳಿಯ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ , ಭಾಸ್ಕರ ಶೆಣೈ , ವಿಶಾಲ್ ಶೆಣೈ ಹಾಗೂ ವಿವಿಧ ಭಜನಾ ಮಂಡಳಿಯ ಸದಸ್ಯರು , ಜಿ ಎಸ್, ಬಿ ಯುವಕ /ಮಹಿಳಾ ಮಂಡಳಿಯ ಸದಸ್ಯರು , ನೂರಾರು ಸಮಾಜ ಭಾಂದವರು ಉಪಸ್ಥರಿದ್ದರು.