ನಾರಾವಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಗುರುವಾಯನಕೆರೆ, ನಾರಾವಿ ವಲಯ ಕುತ್ಲೂರು ಕಾರ್ಯಕ್ಷೇತ್ರದ A ಒಕ್ಕೂಟದ ಭಾಗ್ಯ ಜ್ಯೋತಿ ಸಂಘದ ಸದಸ್ಯರಾದ ಕರುಣಾಕರ ಆಚಾರ್ಯರವರ ಸಹೋದರ ಯಶೋಧರ ಆಚಾರ್ಯರಿಗೆ ವೀಲ್ ಚೇರ್ ಮತ್ತು B ಒಕ್ಕೂಟದ ಅಲಂಬ ಪ್ರಗತಿ ಬಂಧು ತಂಡದ ಸದಸ್ಯ ವಸಂತ ಪೂಜಾರಿರವರ ಮಗ ಗುರುಪ್ರಸಾದ್ ಇವರಿಗೆ ಕಮಂಡೋ ವೀಲ್ ಚೇರ್ ಪರಿಕರಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಜನಮಂಗಳ ಕಾರ್ಯಕ್ರಮದಡಿ ವಿತರಿಸಲಾಯಿತು.

ನಾರಾವಿ ವಲಯ ಮೇಲ್ವಿಚಾರಕಿ ವಿಶಾಲ ಕೆ. ಮತ್ತು ಸಂತೋಷ ಪೂಜಾರಿ, ಏಕನಾಥ ಪೂಜಾರಿ ಅಧ್ಯಕ್ಷರು ಗಳು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ A ಮತ್ತುB ಇವರುಗಳು ಎರಡು ಕುಟುಂಬಗಳ ವಿಶೇಷ ಚೇತನ ಇವರುಗಳಿಗೆ ಪರಿಕರಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನಾರಾವಿ ವಲಯ ಶೌರ್ಯ ವಿಪತ್ತು ಘಟಕದ ಸಂಯೋಜಕರುಗಳಾದ ದಿನೇಶ್ ಶೆಟ್ಟಿ,ಕರಿಯ ಪೂಜಾರಿ , ಸೇವಾ ಪ್ರತಿನಿಧಿ ಶ್ರೀಮತಿ ಉಷಾ ಹಾಗೂ ಆ ಮನೆಯ ಕುಟುಂಬಸ್ಥರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.