ಕಾರ್ಕಳ : ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ ಸಮುದಾಯದವರು ವಾಸಿಸುತ್ತಿರುವ ನಿಂಜೂರು, ರಂಗನಪಲ್ಕೆ ಮತ್ತು ಕಣಂಜಾರು ಈ ಭಾಗದಲ್ಲಿ ಸರಿಯಾದ ಡಾಮರೀಕರಣ ನಡೆಯದೇ ಅದೆಷ್ಟೋ ವರ್ಷಗಳಾಗಿವೆ.ಯಾವ ಆಟೋ ಡ್ರೈವರ್ ಗಳು ಕೂಡ ತಮ್ಮ ಗಾಡಿ ಚಲಾಯಿಸಿಕೊಂಡು ಬರಲು ಹಿಂಜರಿಯುತ್ತಾರೆ.
ದಿನನಿತ್ಯ ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದ ಕಾರ್ಮಿಕರು, ಜನಸಾಮಾನ್ಯರು, ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಹಿಡಿ ಶಾಪ ಹಾಕುತ್ತಿದ್ದಾರೆ.ದಯವಿಟ್ಟು ಈ ರಸ್ತೆಯನ್ನು ದುರಸ್ಥಿ ಗೊಳಿಸಬೇಕು.
ದುರಸ್ಥಿಗೊಳಿಸದಿದ್ದರೆ ಅತೀ ಶೀಘ್ರದಲ್ಲೇ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಭೀಮ್ ಸೇನೆ (ರಿ.) ಇದರ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಸುಧಾಕರ್ ದಾನಶಾಲೆ ಹೇಳಿದ್ದಾರೆ.

