ಮಂಗಳೂರು : ವಿಶ್ವ ಹಿಂದೂ ಪರಿಷತ್ ಶ್ರೀ ಕೃಷ್ಣ ಬಾಲ ಸಂಸ್ಕಾರ ಕೇಂದ್ರ ಶಕ್ತಿನಗರದ ಮಕ್ಕಳಾದ ಮಹೇಶ್, ನಮನ್, ಮಲ್ಲಿಕಾ, ನಿಧಿಶ್ರೀ, ನಿಧಿಷಾ, ಚಂದನ್ ರವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿದ್ದು, ಇವರಿಗೆ ಭಾನುವಾರ ಸಂಸ್ಕಾರ ಕೇಂದ್ರ ಪ್ರಾರಂಭೋತ್ಸವದಂದು ಗೌರವಿಸಲಾಯಿತು.
ಕರ್ನಾಟಕ ದಕ್ಷಿಣ ಪ್ರಾಂತ ಮಾತೃ ಶಕ್ತಿ ಸಹ ಪ್ರಮುಖ್ ಸುರೇಖಾ ರಾಜ್, ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ಶಕ್ತಿ ದುರ್ಗಾ ವಾಹಿನಿ ಶ್ರೀ ವೈದ್ಯನಾಥ ಶಾಖೆ ಶಕ್ತಿನಗರದ ಅಧ್ಯಕ್ಷ ಪ್ರಸಾದ್ ಕುಂಟಲ್ಪಾಡಿ, ಸಹ ಕಾರ್ಯದರ್ಶಿ ಪ್ರಸಾದ್ ಹಾಗೂ ಮಾಲತಿ, ದುರ್ಗಾ ವಾಹಿನಿ ಸಂಯೋಜಕಿ ಸುಮಾ, ಮಾತೃ ಶಕ್ತಿ ಪ್ರಮುಖ್ ಅಮೃತ ಮತ್ತು ಕಾರ್ಯಕರ್ತರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ವರದಿ : ಧನುಷ್ ಕುಲಾಲ್ ಶಕ್ತಿನಗರ

