ಉಡುಪಿ: ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ (ರಿ.) ಇದರ ಎಂಜಿನಿಯರ್ ಮೀಟ್ ಕಾರ್ಯಕ್ರಮವು ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ಜರಗಿತು.
ವೇದಿಕೆಯಲ್ಲಿ ಅತಿಥಿಗಳಾಗಿ ಸಿಂಟ ಆಸ್ಟ್ರೀಸ್ ( SIMTA -ASTRIX ) UPVC ವಿಂಡೋಸ್ ಕಂಪನಿಯ ರೀಜನಲ್ ಮ್ಯಾನೇಜರ್ ಮೋಹನ್ , ಉಡುಪಿ ಅಲ್ಯೂಮಿನಿಯಂ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ನಾಯ್ಕ್ , ಸಿಂಮ್ಟ ಆಸ್ಟ್ರೀಸ್ ( SIMTA -ASTRIX ) UPVC ವಿಂಡೋಸ್ ಕಂಪನಿಯ ಪ್ರಾಜೆಕ್ಟ್ ಹೆಡ್ ಸುನಿಲ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥರಿದ್ದರು.
ಸಿಂಮ್ಟ ಆಸ್ಟ್ರೀಸ್ ( SIMTA -ASTRIX ) UPVC ವಿಂಡೋಸ್ ,ಡೋರ್ಸ್ ಸಿಸ್ಟಮ್ಸ್ ಬಗ್ಗೆ ಆಧುನಿಕ ತಂತ್ರಜ್ಞಾನ ಕುರಿತು ಮಾಹಿತಿ ಕಾರ್ಯಾಗಾರ ನೆಡೆಸಿಕೊಟ್ಟರು. ಮುಖ್ಯ ಅತಿಥಿ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ ಉಡುಪಿ ಅಲ್ಯೂಮಿನಿಯಂ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ನಾಯ್ಕ್ ರವರು ಧಾರ್ಮಿಕ , ಸಾಮಾಜಿಕ , ವ್ಯವಹಾರಿಕ ಕ್ಷೇತ್ರದಲ್ಲಿ ಕರ್ನಾಟದಲ್ಲಿಯೇ ಪ್ರಸಿದ್ಧ ಪಡೆದು ಅತೀ ದೊಡ್ಡ ವಿಶೇಷ ಸಾಧನೆಗೆ ಹಾಗೂ ವಿಶಿಷ್ಟ ಸೇವೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಹೂ ಹಾರ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಗಣೇಶ್ ಬೈಲೂರು , ಭರತ್ ಭೂಷಣ , ಸಂಸ್ಥೆಯ ಅಧ್ಯಕ್ಷರಾದ ಕೆ. ರಂಜನ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಅನಂತೇಶ್ ಆಚಾರ್ಯ ವದನಾರ್ಪಣೆಗೈದರು. ಖಜಾಂಚಿ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯಾಯ ಪ್ರಾರ್ಥನೆ ಮಾಡಿದರು. ಪಟ್ಟಾಭಿರಾಮ ನಿರೂಪಣೆಗೈದರು.