
ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಶ್ರೀಸದಾಶಿವ ದೇವಸ್ಥಾನ ಪೆರಡ್ಕ ಗರಡಾಡಿ ಬೆಳ್ತಂಗಡಿ ಕ್ಷೇತ್ರದಲ್ಲಿ ಶ್ರೀ ರುದ್ರ ನಮಕ ಚಮಕ ಗಣಪತಿ ಸೂಕ್ತ ವಿಷ್ಣು ಸೂಕ್ತ ರುದ್ರ ಸೂಕ್ತ ಸೌರ ಸೂಕ್ತ ದುರ್ಗಾಸೂಕ್ತ ಆಗಮರ್ಶಣ ಸೂಕ್ತ ಶಾಂತಿ ಮಂತ್ರ ಪುಷ್ಪ ಪುರುಷ ಸೂಕ್ತ ಮೊದಲಾದ ವೇದ ಸೂಕ್ತಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್, ಅರ್ಚಕ ಉದಯ ಮಂಜಿ ತಾಯ ಸಮಿತಿಅಧ್ಯಕ್ಷ ಎಂ ಜಯರಾಮ ಮೈಯ್ಯ ಸಂಚಾಲಕ ಎ ರವಿಶಂಕರ ಮೈಯ್ಯ, ಶಾಂತರಾಮ ರಾವ್ ಎಸ್ ಬಿ ಚಂದ್ರಮೋಹನರಾವ್ , ಶ್ರೀನಿವಾಸ ಹೊಳ್ಳ ಮಕ್ಕಾರು,ನಾರಾಯಣರಾವ್ ಬಿ, ಸೀತಾರಾಮಮಯ್ಯ, ಕೆ ರಾಜಾರಾಮ ಐತಾಳ, ಎಪಿ ರಾವ್, ಮೊದಲಾದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
