ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್..!

0
48

ಬೆಂಗಳೂರು : ರಾಜ್ಯದ ಜನಸಾಮಾನ್ಯರು ಹಾಗೂ ಬಡ ಕುಟುಂಬಗಳಿಗೆ ಕರ್ನಾಟಕ ಸರ್ಕಾರ ಮಹತ್ವದ ಆರೋಗ್ಯ ಸೌಲಭ್ಯವನ್ನು ಘೋಷಿಸಿದೆ. ಇನ್ನು ಮುಂದೆ ರೇಷನ್ ಕಾರ್ಡ್ ಹೊಂದಿರುವವರಿಗೆ ಅಕ್ಕಿ, ಬೇಳೆ ಮಾತ್ರವಲ್ಲದೆ ದಂತ ಚಿಕಿತ್ಸೆಯಲ್ಲೂ ಉಚಿತ ಹಾಗೂ ಭಾರೀ ರಿಯಾಯಿತಿ ಸೌಲಭ್ಯ ದೊರೆಯಲಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿ ವೆಚ್ಚವಾಗುತ್ತಿದ್ದ ಹಲ್ಲಿನ ಚಿಕಿತ್ಸೆಯನ್ನು ಇದೀಗ ಆಯುಷ್ಮಾನ್ ಭಾರತ್ ಹಾಗೂ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಸೇರಿಸಲಾಗಿದ್ದು, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರಿಗೆ ದೊಡ್ಡ ಮಟ್ಟದ ನೆರವು ಸಿಗಲಿದೆ.

ಬಿಪಿಎಲ್ ಕಾರ್ಡ್ ದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ

ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಹಲ್ಲಿನ ಚಿಕಿತ್ಸೆ, ರೂಟ್ ಕೆನಾಲ್ ಸೇರಿದಂತೆ ಹಲವು ದಂತ ಚಿಕಿತ್ಸೆಗಳು ಸಂಪೂರ್ಣ ಉಚಿತವಾಗಿ ದೊರೆಯಲಿವೆ. ಯಾವುದೇ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ.

ಎಪಿಎಲ್ ಕಾರ್ಡ್ ದಾರರಿಗೆ 70% ವೆಚ್ಚ ಸರ್ಕಾರದಿಂದ

ಎಪಿಎಲ್ ಕಾರ್ಡ್ ಹೊಂದಿರುವವರು ಚಿಕಿತ್ಸಾ ವೆಚ್ಚದ ಕೇವಲ 30 ശതമಾನವನ್ನು ಮಾತ್ರ ಪಾವತಿಸಬೇಕು. ಉಳಿದ 70 ശതമಾನ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.

ಚಿಕಿತ್ಸೆ ಪಡೆಯುವುದು ಹೇಗೆ?

ಈ ಸೌಲಭ್ಯ ಪಡೆಯಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ನೋಂದಾಯಿತ ಸರ್ಕಾರಿ ಅಥವಾ ಆಯ್ದ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಅಲ್ಲಿರುವ ಆಯುಷ್ಮಾನ್ ಮಿತ್ರ ಕೌಂಟರ್‌ನಲ್ಲಿ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತೋರಿಸಿ ನೋಂದಣಿ ಮಾಡಿಸಿಕೊಂಡರೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಬಹುದು.

ಅಗತ್ಯ ದಾಖಲೆಗಳು

  • ಚಾಲ್ತಿಯಲ್ಲಿರುವ ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ್
  • ಆಧಾರ್ ಕಾರ್ಡ್

ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಜನರಿಗೆ ಆರೋಗ್ಯ ಭದ್ರತೆ ಸಿಗಲಿದ್ದು, ಹಲ್ಲಿನ ಚಿಕಿತ್ಸೆಗೆ ಹಣದ ಕೊರತೆಯಿಂದ ಬಳಲುತ್ತಿದ್ದವರಿಗೆ ಇದು ದೊಡ್ಡ ನೆರವಾಗಲಿದೆ.

LEAVE A REPLY

Please enter your comment!
Please enter your name here