ಸ್ವಚ್ಛ ಉಡುಪಿ- ಹಸಿರು ಉಡುಪಿ ಅಭಿಯಾನಕ್ಕೆ ಚಾಲನೆ

0
19

ಉಡುಪಿ : ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಯಾಗಬಾರದು. ಅದು ದೈನಂದಿನ ಜೀವನದ ಭಾಗವಾಗಬೇಕು. ಉಡುಪಿಯನ್ನು ಪರಿಸರ ಸ್ನೇಹಿ ನಗರವನ್ನಾಗಿ ಪರಿವರ್ತಿಸಲು ಸಾರ್ವಜನಿಕರು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರ ಶ್ಲಾಘನೀಯ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಅಜ್ಜರಕಾಡು ಭುಜಂಗ ಪಾರ್ಕ್​ನಲ್ಲಿ ನಗರಸಭೆ, ಅಸೋಸಿಯೇಶನ್​ ಆಫ್​ ಕನ್ಸಲ್ಟಿಂಗ್​ ಸಿವಿಲ್​ ಇಂಜಿನಿಯರ್ಸ್​ ಆಂಡ್​ ಆರ್ಕಿಟೆಕ್ಟ್ಸ್​ ಮತ್ತು ಕ್ರೆಡಾಯ್​ ಸಂಸ್ಥೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಸ್ವಚ್ಛ ಉಡುಪಿ – ಹಸಿರು ಉಡುಪಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರಸಭೆ ಪೌರಾಯುಕ್ತ ಮಹಾಂತೇಶ್​ ಹಂಗರಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಜ್ಜರಕಾಡು ವಾರ್ಡ್​ನ ಮಾಜಿ ನಗರಸಭಾ ಸದಸ್ಯೆ ರಶ್ಮಿ ಭಟ್​, ಅಸೋಸಿಯೇಶನ್​ ಆಫ್​ ಕನ್ಸಲ್ಟಿಂಗ್​ ಸಿವಿಲ್​ ಇಂಜಿನಿಯರ್ಸ್​ ಆಂಡ್​ ಆರ್ಕಿಟೆಕ್ಟ್​ ಘಟಕದ ಅಧ್ಯಕ್ಷ ಭಗವಾನ್​ ದಾಸ್​ ಕೆ., ಕಾರ್ಯದರ್ಶಿ ಮಹೇಶ್​ ಕಾಮತ್​, ಕೋಶಾಧಿಕಾರಿ ಅಮಿತ್​ ಅರವಿಂದ್​ ನಾಯಕ್​, ಗೌರವಾಧ್ಯಕ್ಷ ನಾಗೇಶ್​ ಹೆಗ್ಡೆ ಹಾಗೂ ಮಾಜಿ ಅಧ್ಯಕ್ಷ ಗೋಪಾಲ್​ ಭಟ್​, ಕ್ರೆಡಾಯ್​ ಕೋಶಾಧಿಕಾರಿ ಕೃಷ್ಣ ಭಟ್​ ಹಾಗೂ ಕ್ರೆಡಾಯ್​ ಕಾರ್ಯದರ್ಶಿ ಅಮಿತ್​ ಅರವಿಂದ್​ ನಾಯಕ್​ ಉಪಸ್ಥಿತರಿದ್ದರು.

ಜಗದೀಶ್​ ಆಚಾರ್ಯಕಾರ್ಯಕ್ರಮ ನಿರೂಪಿಸಿದರು. ಪರಿಸರ ದಿನಾಚರಣೆಯ ನೆನಪಿಗಾಗಿ ಗಿಡಗಳನ್ನು ನೆಡುವ ಮೂಲಕ ಹಸಿರು ಉಡುಪಿ ಸಂಕಲ್ಪ ಕೈಗೊಳ್ಳಲಾಯಿತು.

LEAVE A REPLY

Please enter your comment!
Please enter your name here