ಮೂಡುಬಿದಿರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಹಾಗೂ ದಿಲಿಪ್ ಬಿಲ್ಡ್ಕಾನ್ ಲಿಮಿಟೆಡ್ ವತಿಯಿಂದ ರಾ.ಹೆ. ಬದಿಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಎನ್ಎಚ್ಎಐ ಯೋಜನಾ ನಿರ್ದೇಶಕ ಅಬ್ದುಲ್ ಜಾವೆದ್ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಈ ಹಸಿರಿನ ಹೆಜ್ಜೆಗಳು ನಾಳಿನ ಪರಿಸರದ ಭದ್ರತೆಗೆ ದಾರಿಯಾಗಲಿದೆ ಎಂದರು.
ಡಿಬಿಎಲ್ ಜನರಲ್ ಮ್ಯಾನೇಜರ್ ಟಿ.ರಾಘವ ರಾವ್, ಟೀಮ್ ಲೀಡರ್ ಸುರೇಂದ್ರ ಪಟ್ಟಾರ್ ಮತ್ತಿತರರಿದ್ದರು.