ಉಡುಪಿ: ಆಪರೇಷನ್ ಸಿಂಧೂರ ಕೇವಲ ಪಾಕಿಸ್ತಾನಿಗಳಿಗೆ ಮಾತ್ರ ನೋವಾಗಿಲ್ಲ, ಭಾರತದೊಳಗಿನ ಪಾಕ್ ಮನಸ್ಥಿತಿಯವರಿಗೂ ನೋವಾಗಿದೆ. ಭಾರತದ ಮೇಲೆ ದಾಳಿಯಾದಾಗ, ಹಿಂದೂ ಕಾರ್ಯಕರ್ತರ ಮೇಲೆ ದಾಳಿಯಾದಾಗ ಜಪಿಸದ ಶಾಂತಿಯ ಮಂತ್ರವನ್ನು ಪಾಕಿಸ್ತಾನದ ಮೇಲೆ ದಾಳಿ ಮಾಡಿದಾಗ ಜಪಿಸುತ್ತಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೇಸ್ ವಿರುದ್ಧ ಕಿಡಿಕಾರಿದ್ದಾರೆ.

