ದಾವಣಗೆರೆ :ಶಿವಾನಿ ಗ್ರೂಪ್ಸ್ ಆಫ್ ಹೋಟೆಲ್ ಮತ್ತು ಸವಿಡೈನ್ ಗ್ರೂಪ್ ಆಫ್ ಹೋಟೆಲ್ ದಾವಣಗೆರೆ ಇವರ ಪ್ರಾಯೋಜಕತ್ವದಲ್ಲಿ ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಶಶಿಪ್ರಭಾ ಪರಿಣಯ” ಪೌರಾಣಿಕ ಯಕ್ಷಗಾನ ಕಥಾನಕದ ಉಚಿತ ಯಕ್ಷಗಾನ ಪ್ರದರ್ಶನ ದಿನಾಂಕ 29-06-2025ನೇ ಭಾನುವಾರ ಸಂಜೆ 6-30ಕ್ಕೆ ನಗರದ ವಿದ್ಯಾನಗರ ರಸ್ತೆಯ ದೃಶ್ಯ ಕಲಾ ಮಹಾವಿದ್ಯಾಲಯದ ಒಳಾಂಗಣದ ರಂಗ ಮಂದಿರದದಲ್ಲಿ ನಡೆಯಲಿದೆ ಎಂದು ಶಿವಾನಿ ಗ್ರೂಪ್ಸ್ ಆಫ್ ಹೋಟೆಲ್ ದಾವಣಗೆರೆ ಮತ್ತು ಸವಿಡೈನ್ ಗ್ರೂಪ್ ಆಫ್ ಹೋಟೆಲ್ನ ಮಾಲೀಕರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ತಿಳಿಸಿದ್ದಾರೆ.