ಮಣಿಪಾಲ : ಕೊರಗ ಸಮುದಾಯದ ಯುವಜನರ ಉದ್ಯೋಗ ನೇರ ನೇಮಕಾತಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು 21 ನೇ ದಿನದತ್ತ ಸಾಗುತ್ತಿದೆ.
ಈ ಸಂದರ್ಭದಲ್ಲಿ ಕೊರಗ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ, ಮಾಜಿ ಅಧ್ಯಕ್ಷೆ ಅಮ್ಮಣ್ಣಿ ಚೋರಾಡಿ, ಕೆ. ಪುತ್ರನ್ ಹೆಬ್ರಿ, ಸುಪ್ರಿಯಾ ಎಸ್. ಕಿನ್ನಿಗೋಳಿ, ಸುರೇಶ ಕಾಪು, ಶಶಿಕಲಾ ಹೆಬ್ರಿ, ಪುಷ್ಪ ಹೆಬ್ರಿ, ದಿವಾಕರ ಕಳ್ತೂರು, ಆಶಾ ಕೆಮ್ಮಡೆ, ನಾಗು ನಾಡ ಮತ್ತು ಇತರರು ಹಾಜರಿದ್ದರು.

