ಮೂಡುಬಿದಿರೆ: ರಾಷ್ಟ್ರಪತಿ ಅವರಿಂದ ಸನ್ಮಾನಗೊಂಡಿರುವ ಹಿರಿಯ ಜಾನಪದ ಕಲಾವಿದ, ನೆಲ್ಲಿಕಾರು ಗ್ರಾಪಂ ಮಾಜಿ ಸದಸ್ಯ ಸೇಸಪ್ಪ ಪಾಂಡ್ರು ಅನಾರೋಗ್ಯದಿಂದ ಭಾನುವಾರ ನಿಧನರಾದರು.
ಚಿತ್ರದುರ್ಗದ ತೋವಿನಕೆರೆ ನಾಟಕ ಮಂಡಳಿಯಲ್ಲಿ ಕಲಾವಿದನಾಗಿ ಸೇವೆ ಸಲ್ಲಿಸಿರುವ ಅವರು ಮಾಯಿ ಪುರುಷ ಕಲಾವಿದರಾಗಿ ತನ್ನದೇ ಆದ ತಂಡವನ್ನು ಕಟ್ಟಿಕೊಂಡು, ಧರ್ಮಸ್ಥಳ ಕೃಷಿಮೇಳ, ಕನ್ನಡ ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧೆಡೆ ಕಲಾಸೇವೆ ಮಾಡಿದ್ದಾರೆ.ಯಕ್ಷಗಾನ ಕಲಾವಿದರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಜನಪದ ಕ್ಷೇತ್ರದ ಸಾಧನೆಗಾಗಿ ಮಾಜಿ ಪ್ರಧಾನಿ ಇಂದಿರಾಗಾAಧಿ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ರಾಷ್ಟçಪತಿ ಅವರಿಂದ ಸನ್ಮಾನಗೊಂಡಿದ್ದರು. ಅಳಿಯೂರು ಪಾಣರ ಸಂಘದ ಅಧ್ಯಕ್ಷರಾಗಿಯ ಸೇವೆ ಸಲ್ಲಿಸಿದ್ದರು.
ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.