ವೋಟ್​ ಚೋರ್​ ಗದ್ದಿ ಚೋಡ್​ ಅಭಿಯಾನ

0
142


ಉಡುಪಿ: ಜಿಲ್ಲೆಯಲ್ಲಿ ವೋಟ್​ ಚೋರ್​ ಗದ್ದಿ ಚೋಡ್​ ಅಭಿಯಾನ ನಡೆಯುತ್ತಿದ್ದು, 1111 ಬೂತ್​ಗಳಿಂದ ಕನಿಷ್ಠ ತಲಾ 100 ಮಂದಿಯಿಂದ 1,11,000 ಸಹಿಗಳನ್ನು ಸಂಗ್ರಹಿಸಿ ರಾಹುಲ್​ ಗಾಂಧಿಯವರಿಗೆ ತಲುಪಿಸಲಾಗುವುದು. ಈ ಮೂಲಕ ರಾಷ್ಟ್ರಾದ್ಯಂತ ನಡೆಯುತ್ತಿರುವ ಅಭಿಯಾನಕ್ಕೆ ಬೆಂಬಲ ನೀಡಲಾಗುವುದು ಎಂದು ವಿಧಾನ ಪರಿಷತ್​ ಸದಸ್ಯ ಐವನ್​ ಡಿಸೋಜಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಸರ್ಕಾರ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ವಿರೋಧ ಪಕ್ಷದ ಅಭಿಪ್ರಾಯವನ್ನೂ ತೆಗೆದುಕೊಳ್ಳದಿರುವುದು ಖೇದಕರ ಎಂದರು.
ಜಿಲ್ಲೆಯಲ್ಲಿ 11 ಮಂದಿಯ ನೂತನ ಕೋರ್​ ಕಮಿಟಿ ರಚಿಸಲಾಗಿದ್ದು, ಮುಂದಿನ ಜಿಪಂ ಮತ್ತು ತಾಪಂ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ. ದೇಶದ ರಾಜಕಾರಣದಲ್ಲಿ ಕಾಂಗ್ರೆಸ್​ ಬಲಿಷ್ಠವಾಗಿ ಬೆಳೆಯುತ್ತಿದೆ ಎಂದರು.
ರಾಜ್ಯ ಸರ್ಕಾರ ಸೆ. 22ರಿಂದ ಅ.7ರವರೆಗೆ ಸಾಮಾಜಿಕ ಶೈಕ್ಷಣಿಕ ಸಮೀೆ ಹಮ್ಮಿಕೊಂಡಿದೆ. ಪ್ರತಿ ಶಿಕ್ಷಕರು ತಲಾ 20 ಮನೆಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಲಿದ್ದಾರೆ. ಸಮೀೆ ವರದಿ ಆಧಾರದಲ್ಲಿ ಯಾವ ಸಮುದಾಯಕ್ಕೆ ಎಷ್ಟು ಹಣ ಮೀಸಲಿಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಇದು ರಾಜಕೀಯ ಸಮೀೆಯಲ್ಲ. ರಾಜಕೀಯ ಲೇಪ ಕೊಡುವ ಅಗತ್ಯವಿಲ್ಲ. ಎಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ನ್ಯೂನ್ಯತೆಗಳಿದ್ದಲ್ಲಿ ಚರ್ಚೆಯಾಗಿದೆ. ಸರ್ಕಾರದ ತೀರ್ಮಾನಕ್ಕೆ ನಾವು ಬದ್ಧ ಎಂದರು.
ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ಮಾಜಿ ಸಂಸದ ಜಯಪ್ರಕಾಶ್​ ಹೆಗ್ಡೆ, ಮಾಜಿ ಶಾಸಕ ಗೋಪಾಲಪೂಜಾರಿ, ಮುಖಂಡರಾದ ಎಂ.ಎ. ಗೂರ್​, ಮುನಿಯಾಲು ಉದಯ್​ ಶೆಟ್ಟಿ, ಪ್ರಸಾದ್​ ಕಾಂಚನ್​, ಕಿಶನ್​ ಹೆಗ್ಡೆ, ದಿನೇಶ್​ ಹೆಗ್ಡೆ ಮೊಳಹಳ್ಳಿ, ರಾಜು ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here