ಕುದ್ಯಾಡಿ : ಸುಲ್ಕೇರಿ ಗ್ರಾಮ ಪಂಚಾಯತು ವ್ಯಾಪ್ತಿಯ ಸದ್ಧರ್ಮ ಯುವಕ ಮಂಡಲದ ನೂತನ ಸಭಾಂಗಣ ಸದ್ಧರ್ಮ ಇದರ ಲೋಕಾರ್ಪಣಾ ಸಮಾರಂಭದಲ್ಲಿ ವಿಜಯ ಕುಮಾರ್ ಜೈನ್ ಇವರಿಗೆ ಸನ್ಮಾನ
ಆಮಂತ್ರಣ ಪರಿವಾರದ ಸೇವೆಯನ್ನು ಹಾಗೂ ವೈಯುಕ್ತಿಕ ಸೇವೆಗಳನ್ನು ಗಮನಿಸಿ ಮತ್ತು ಸದ್ಧರ್ಮ ಯುವಕ ಮಂಡಲಕ್ಕೆ ನೀಡಿದ ಸಹಕಾರವನ್ನು ಗಮನಿಸಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ನಿತ್ಯಾನಂದ ಎನ್ ಯೋಗಕ್ಷೇಮ ನಾವರ, ಪಾಕತಜ್ಞರಾದ ನಾಗಕುಮಾರ್ ಜೈನ್, ಪ್ರಗತಿಪರ ಕೃಷಿಕರಾದ ವಿಶ್ವನಾಥ ಕುದ್ಯಾಡಿ, ಯುವಕ ಮಂಡಲದ ಅಧ್ಯಕ್ಷರಾದ ಸದಾನಂದ ಬಿ.ಕುದ್ಯಾಡಿ , ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.